ಶೇಷಾದ್ರಿಪುರಂ ರಾಯರ ಮಠದಲ್ಲಿ ಗುರುಗಳ ಪಟ್ಟಾಭಿಷೇಕ ಮಹೋತ್ಸವ

ವಾರ್ತಾಜಾಲ
By -
0

ಬೆಂಗಳೂರು : ಶೇಷಾದ್ರಿಪುರದ ಪ್ಲಾಟ್ ಫಾರಂ ರಸ್ತೆಯಲ್ಲಿರುವ (ಮಂತ್ರಿ ಮಾಲ್ ಮೆಟ್ರೋ ರೈಲ್ವೆ ನಿಲ್ದಾಣದ ಎದುರು) ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ  ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಮಾರ್ಚ್ 11 ರಿಂದ 16ರ ವರೆಗೆ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ ಮತ್ತು ವರ್ಧಂತ್ಯೋತ್ಸವ ಸಮಾರಂಭವನ್ನು ಆಯೋಜಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :

"ಶ್ರೀಮದ್ಭಾಗವತ "ಪ್ರವಚನ : ಮಾರ್ಚ್ 11 ರಿಂದ 16 ಪ್ರತಿದಿನ ಸಂಜೆ 6-00 ಗಂಟೆಗೆ ಮ||ಶಾ||ಸಂ|| ಶ್ರೀ ಉಡುಪಿ ಕೃಷ್ಣಾಚಾರ್ಯರಿಂದ "ಶ್ರೀಮದ್ಭಾಗವತ" ಪ್ರವಚನ.

ಭಜನಾಮೃತ : ಪ್ರತಿದಿನ ಸಂಜೆ 5-00 ರಿಂದ 6-00.  ಮಾರ್ಚ್ 11 : ಶ್ರೀ ವಿಜಯ ವಿಠಲ ಭಜನಾ ಮಂಡಳಿ (ವಿದ್ಯಾರಣ್ಯಪುರ), ಮಾರ್ಚ್ 12 : ಅಂಭ್ರಣಿ ಭಜನಾ ಮಂಡಳಿ (ರಾಜಾಜಿನಗರ), ಮಾರ್ಚ್ 13 : ಅಲಕನಂದ ಭಜನಾ ಮಂಡಳಿ (ಬಸವೇಶ್ವರನಗರ), ಮಾರ್ಚ್ 14 : ರುಕ್ಮಿಣಿ ಮಹಿಳಾ ಸಂಘ  (ರಾಜಾಜಿನಗರ), ಮಾರ್ಚ್ 15 : ಶ್ರೀ ವಿಜಯ ವಿಠಲ ಭಜನಾ ಮಂಡಳಿ (ಈಜುಕೊಳದ ಬಡಾವಣೆ).

"ಹರಿನಾಮ ಸಂಕೀರ್ತನೆ" : ಮಾರ್ಚ್ 16, ಶನಿವಾರ ಸಂಜೆ 7-00ಕ್ಕೆ "ಹರಿನಾಮ ಸಂಕೀರ್ತನೆ" : ಗಾಯನ : ಶ್ರೀಮತಿ ಸುಷ್ಮಾ ಶ್ರೇಯಸ್, ಕೀ-ಬೋರ್ಡ್ :  ಶ್ರೀ ಅಮಿತ್ ಶರ್ಮಾ, ತಬಲಾ : ಶ್ರೀ ಸರ್ವೋತ್ತಮ.

ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಹಾಗೂ ಹರಿವಾಯುಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಮಠದ ಪದಾಧಿಕಾರಿಗಳು ವಿನಂತಿಸಿದ್ದಾರೆ.

Post a Comment

0Comments

Post a Comment (0)