ಫೋಕ್ಸೋ ಕಾಯ್ದೆಯಡಿ ಬಾಲ ಮಂಜುನಾಥ ಸ್ವಾಮೀಜಿ ಬಂಧನ : ರಾಜಕೀಯ ಷಡ್ಯಂತ್ರ

ವಾರ್ತಾಜಾಲ
By -
0
.ಬೆಂಗಳೂರು; ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಹುಲಿಯೂರು ದುರ್ಗದ ವಿದ್ಯಾಚೌಡೇಶ್ವರಿ ಮಠದ ಪೀಠಾಧಿಪತಿ ಬಾಲ ಮಂಜುನಾಥ ಸ್ವಾಮೀಜಿ ಅವರನ್ನು ಬಂಧಿಸಿರುವುದು ರಾಜಕೀಯ ಷಡ್ಯಂತರವಾಗಿದೆ ಎಂದು ಚೌಡೇಶ್ವರಿ ಮಠದ ಭಕ್ತ ಸಮೂಹ ಆರೋಪಿಸಿದ್ದಾರೆ.

ಸ್ವಾಮೀಜಿ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು, ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸದೇ ಬಂಧಿಸಲಾಗಿದೆ. ಇದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ ಎಂದು ಮಠದ ಭಕ್ತರು ಆರೋಪಿಸಿದ್ದಾರೆ.



ಈ ‍ಮಧ್ಯೆ ಮಾಜಿ ಕಾನೂನು ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಜೆ. ಸಿ.ಮಾಧುಸ್ವಾಮಿ ಮಾತನಾಡಿ, ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದ ತಕ್ಷಣ ಆರೋಪಿಯನ್ನು ಬಂಧಿಸಲೇಬೇಕು ಅಂತ ಹೇಳಿದ್ದಾರೆ



ಕಾನೂನಿನಲ್ಲಿ ದೂರು ಸ್ವೀಕರಿಸದೇ ಇರಲು ಸಾಧ್ಯವೇ ಇಲ್ಲ. ಕಾನೂನು ಇರುವುದೇ ಹಾಗೆ. ಒಳ್ಳೆಯವರೋ, ಕೆಟ್ಟವರೋ ಯಾರೇ ದೂರು ನೀಡಿದರೂ ಸ್ವೀಕರಿಸಬೇಕಾಗುತ್ತದೆ. ಯಾರು ದೂರು ನೀಡಿದ್ದಾರೆ ಎಂಬುದು ಮುಖ್ಯವಲ್ಲ. ಪ್ರಕರಣ ದಾಖಲಾದ ನಂತರ ಬಂಧಿಸಬೇಕಿಲ್ಲ. ಆದರೆ ಬಂಧಿಸಬೇಕೋ ಅಥವಾ ಬೇಡವೋ ಎಂಬುದು ಪೊಲೀಸರ ವಿವೇಚೆನೆಗೆ ಬಿಟ್ಟದ್ದು ಎಂದು ತಿಳಿಸಲಾಗಿದೆ.

ವಿದ್ಯಾ ಚೌಡೇಶ್ವರಿ ಮಠದ ಪೀಠಾಧಿಪತಿಗಳಾದ ಬಾಲ ಮಂಜುನಾಥ ಸ್ವಾಮಿಜೀ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದಾರೆ ಶ್ರೀ ವಿದ್ಯಾ ಚೌಡೇಶ್ವರಿ ದೇವಸ್ಥಾನಕ್ಕೆ ಲಕ್ಷಾಂತರ ಬಕ್ತರು ಬಂದು ತಾಯಿ ಚೌಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಿದ್ದಾರೆ. ಇದರ ಹಿನ್ನೆಲೆ ಕೆಲವು ನಕಲಿ ಜ್ಯೋತಿಷ್ಯರು ಶ್ರೀ ಬಾಲ ಮಂಜುನಾಥ ಸ್ವಾಮಿಯವರ ವಿರುದ್ಧ ಪಿತೂರಿ ನಡೆಸಿದ್ದಾರೆ ಎಂಬುದು ಭಕ್ತರು ಆರೋಪವಾಗಿದೆ.


Post a Comment

0Comments

Post a Comment (0)