ರಾಜ್ಯಸಭಾ ಸದಸ್ಯೆಯಾಗಿ ಶ್ರೀಮತಿ ಸುಧಾ ಮೂರ್ತಿಯವರ ನೇಮಕ- ಪ್ರಧಾನಿಯವರಿಗೆ ವಿಜಯೇಂದ್ರ ಧನ್ಯವಾದ

ವಾರ್ತಾಜಾಲ
By -
0

ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನದಂದೇ ರಾಜ್ಯದ ಶ್ರೇಷ್ಠ ಸಾಧಕಿ ಶ್ರೀಮತಿ ಸುಧಾ ಮೂರ್ತಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದ ಕೇಂದ್ರ ಸರಕಾರದ ಕ್ರಮ ಶ್ಲಾಘನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಈ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿಜೀ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ ಹಾಗೂ ಸುಧಾಮೂರ್ತಿ ಅವರನ್ನು ಅಭಿನಂದಿಸಿದ್ದಾರೆ.



https://twitter.com/BJP4Karnataka/status/1766015283721023927?t=rLhoxP6OoGQR02S3WKZc0w&s=19

ಮೂಲತಃ ಧಾರವಾಡದವರಾದ ಸುಧಾ ಮೂರ್ತಿ ಅವರು ಸಮಾಜಸೇವೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡವರು. ಇನ್‍ಫೋಸಿಸ್ ಫೌಂಡೇಷನ್‍ನ ಹಿನ್ನೆಲೆ ಇದ್ದರೂ ಸದಾ ಸರಳತೆ ಮೆರೆದವರು. ಅನಾಥ ಮಕ್ಕಳಿಗೆ ನೆರವು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡಿದ ಅವರು, ಮಹಿಳಾ ಶಿಕ್ಷಣಕ್ಕೆ, ಸ್ವಾವಲಂಬಿತನಕ್ಕೆ ಹಾಗೂ ಮಹಿಳಾ ಸಂಘಟನೆಗಳ ಅಭಿವೃದ್ಧಿಗೆ ನೆರವು ನೀಡಿದ್ದಾರೆ. ‘ನಾರಿ ಶಕ್ತಿ’ಯನ್ನು ಗುರುತಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಕ್ರಮ ಎಂದು ಮೆಚ್ಚುಗೆ ಸೂಚಿಸಿದ್ದಾರೆ.


Post a Comment

0Comments

Post a Comment (0)