ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಪ್ರಯುಕ್ತ ಶ್ರೀನಿವಾಸ ಕಲ್ಯಾಣ, ಲಕ್ಷ್ಮೀ ಶೋಭಾನೆ, ಗೀತ ಗಾಯನ

ವಾರ್ತಾಜಾಲ
By -
0

ಬೆಂಗಳೂರು : ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಚಾಮರಾಜಪೇಟೆಯ ಸೀತಾಪತಿ ಅಗ್ರಹಾರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾರ್ಚ್ 11 ರಿಂದ 17ರ ವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮತ್ತು ವರ್ಧಂತ್ಯೋತ್ಸವದ ಪ್ರಯುಕ್ತ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ : 

 ದಾಸವಾಣಿ ಕಾರ್ಯಕ್ರಮಗಳು : ಮಾರ್ಚ್ 11 ರಿಂದ 14ರ ವರೆಗೆ ಪ್ರತಿದಿನ ಸಂಜೆ 6-30ಕ್ಕೆ, ಕ್ರಮವಾಗಿ : ಕು|| ಎಸ್.ವಿ. ಚಂದನ ಮತ್ತು ಸಂಗಡಿಗರು, ಕು|| ಅನನ್ಯ ಬೆಳವಾಡಿ ಮತ್ತು ಸಂಗಡಿಗರು, ಕು|| ಸುಶ್ರಾವ್ಯ ಆಚಾರ್ಯ ಮತ್ತು ಸಂಗಡಿಗರು, ಶ್ರೀಮತಿ ಸುಷ್ಮಾ ಜೋಯಿಸ್ ಮತ್ತು ಸಂಗಡಿಗರು.


 ಶ್ರೀಲಕ್ಷ್ಮೀ ಶೋಭಾನೆ ಮತ್ತು ಭರತನಾಟ್ಯ : ಮಾರ್ಚ್ 15 -  ಸಂಜೆ 5ಕ್ಕೆ ಟಿ ಟಿ ಡಿ ದಾಸಸಾಹಿತ್ಯ ಪ್ರಾಜೆಕ್ಟ್ ಮತ್ತು ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಶ್ರೀಲಕ್ಷ್ಮೀ ಪೂಜೆ ಸಹಿತ ಶ್ರೀ ಲಕ್ಷ್ಮೀ ಶೋಭಾನೆ. ನಂತರ ನಾಟ್ಯೇಶ್ವರ ನೃತ್ಯ ಶಾಲೆಯ ಗುರುಗಳಾದ 'ಕಲಾಯೋಗಿ' ಶ್ರೀ ಸತೀಶ್ ಬಾಬು ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ "ಭರತನಾಟ್ಯ ಪ್ರದರ್ಶನ". ಮಾರ್ಚ್ 16 : ಕು|| ಪ್ರಣೀತಾ ಟಿ. ಮಣೂರ್ ಮತ್ತು ಸಂಗಡಿಗರಿಂದ "ದಾಸರ ಪದಗಳ ರಸಧಾರೆ".

 ಶ್ರೀಶ್ರೀನಿವಾಸ ಕಲ್ಯಾಣ : ಮಾರ್ಚ್ 17, ಭಾನುವಾರ ಸಂಜೆ 6-00ಕ್ಕೆ : ಶ್ರೀವಾರಿ ಫೌಂಡೇಶನ್ ವತಿಯಿಂದ "ಶ್ರೀ ಶ್ರೀನಿವಾಸ ಕಲ್ಯಾಣ". ಭಾಗವಹಿಸುವ ಭಜನಾ ಮಂಡಳಿಗಳು : ಮಧ್ವರಾಜ ಭಜನಾ ಮಂಡಳಿ, ಚಂದ್ರಿಕಾ ಭಜನಾ ಮಂಡಳಿ, ಗುರುರಾಜ ಭಜನಾ ಮಂಡಳಿ, ಅಂಬರೀಶ ಭಜನಾ ಮಂಡಳಿ, ಹೃಷಿಕೇಶ ಭಜನಾ= ಮಂಡಳಿ, ಜಯಗೋವಿಂದ ಭಜನಾ ಮಂಡಳಿ, ಪವಮಾನ ಭಜನಾ ಮಂಡಳಿ ಮತ್ತು ಶ್ರೀರಾಮ ಭಜನಾ ಮಂಡಳಿಗಳು ಭಾಗವಹಿಸಲಿವೆ.

Post a Comment

0Comments

Post a Comment (0)