Ticker

6/recent/ticker-posts

Ad Code

Responsive Advertisement

ಜ್ಞಾನಭಾರತಿ ಬಡಾವಣೆಯ ಮಹಿಳೆಯರಿಗಾಗಿ ಮೈಸೂರು ಪ್ರವಾಸ

ಬೆಂಗಳೂರು : ಯಶವಂತಪುರ ವಿಧಾನಸಭಾ ಕ್ಷೇತ್ರದ ಜ್ಞಾನಭಾರತಿ ಬಡಾವಣೆಯ ಮಹಿಳೆಯರಿಗಾಗಿ ಒಂದು ದಿನದ ಮೈಸೂರಿನ ಧಾರ್ಮಿಕ ಕ್ಷೇತ್ರಗಳ  ಪ್ರವಾಸವನ್ನು ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಎಸ್.ಟಿ. ಸೋಮಶೇಖರ್ ರವರ ವತಿಯಿಂದ ಆಯೋಜಿಸಲಾಗಿತ್ತು, ಈ ಒಂದು ದಿನದ ಯಾತ್ರೆಯಲ್ಲಿ ಮೈಸೂರು ಹಾಗೂ ಸುತ್ತುಮುತ್ತಲಿನ ಸುಮಾರು ಆರು ದೇವಸ್ಥಾನಗಳಿಗೆ ಭೇಟಿ ನೀಡುವ ಹಾಗೂ ದೇವರ ದರ್ಶನ ಭಾಗ್ಯದ ಅವಕಾಶವನ್ನು ಕಲ್ಪಿಸುವುದರೊಂದಿಗೆ, ಯಾತ್ರಿಕರೆಲ್ಲರಿಗೂ ತಿಂಡಿ ಹಾಗೂ ಊಟೋಪಚಾರಗಳನ್ನು ಕುಡಿಯುವ ನೀರು, ಕಾಫಿ-ಟೀ ವ್ಯವಸ್ಥೆಯನ್ನು ಸಹ ಅಚ್ಚುಕಟ್ಟಾಗಿ  ವ್ಯವಸ್ಥೆ ಮಾಡಲಾಗಿತ್ತು. ಮಾನ್ಯ ಸಚಿವರು ತಮ್ಮ ಕ್ಷೇತ್ರದ ಎಲ್ಲಾ ಸ್ತ್ರೀ ಶಕ್ತಿ ಸಂಘಗಳ ಮಹಿಳಾ ಸದಸ್ಯರು, ಎಲ್ಲಾ ಸಿಬ್ಬಂದಿಗಳು  ಹಾಗೂ ಶಾಲಾ ಮಕ್ಕಳಿಗೂ ಧಾರ್ಮಿಕ, ಶೈಕ್ಷಣಿಕ ಹಾಗೂ ಮನೋರಂಜನಾ ಪ್ರವಾಸಗಳನ್ನು ಆಗಿಂದಾಗ್ಯೆ ಏರ್ಪಡಿಸುತ್ತಾ ಬಂದಿರುವುದು ಈ ಕ್ಷೇತ್ರದ ಜನರಿಗೆ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಾಮಾನ್ಯ  ಯಾತ್ರಾ-ಪ್ರವಾಸ ಕಾರ್ಯಕ್ರಮವಾಗಿದ್ದು, ಇತ್ತೀಚಿನ ಮೈಸೂರು ಪ್ರವಾಸಕ್ಕೆ 50 ಜನ ಮಹಿಳೆಯರೆಲ್ಲರೂ, ಕುಟುಂಬಗಳಲ್ಲಿ ಅವಿರತವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಗೃಹಿಣಿಯರಾಗಿದ್ದು, ಯಾತ್ರಾರ್ಥಿಗಳಾಗಿ ದರ್ಶನ ಪಡೆದು ಸಂತಸದಿಂದ ಹಿಂದಿರುಗಿದ್ದಾರೆ.



ಈ ಪ್ರವಾಸವನ್ನು ಆಯೋಜಿಸಲು ಸಹಕರಿಸಿದ ಹೇರೋಹಳ್ಳಿ ವಾರ್ಡಿನ ಬಿಜೆಪಿ ಮುಖಂಡರಾದ  ರೇವಣ್ಣ, ಚೇತನ,  ಶಬರೀಶ್ ಮುಂತಾದವರಿಗೆ, ಜ್ಞಾನಭಾರತಿ ಬಡಾವಣೆಯ ಮಹಿಳೆಯರು ಮಾನ್ಯ ಸಚಿವರು ಹಾಗೂ ಈ  ಪ್ರವಾಸ ಕಾರ್ಯಕ್ರಮಕ್ಕೆ ಅಗತ್ಯವಾದ ನೆರವು ಹಾಗೂ  ಸಿದ್ಧತೆಗಳನ್ನು ಮಾಡಿಕೊಟ್ಟಿದ್ದ ಎಲ್ಲರಿಗೂ  ಅಭಿನಂದನೆ ಸಲ್ಲಿಸಿದರು,  ಈ ಪ್ರವಾಸದ ಮೇಲುಸ್ತುವಾರಿ ಹಾಗೂ ನೇತೃತ್ವವನ್ನು ಬಿಜೆಪಿ ಪಕ್ಷದ ಫಲಾನುಭವಿ ಪ್ರಕೋಷ್ಠದ ಬೆಂಗಳೂರು ಉತ್ತರ ಜಿಲ್ಲಾ ಸದಸ್ಯರಾದ ಶ್ರೀಮತಿ ಆಶಾ ಲೋಹಿತ್ ರವರು ವಹಿಸಿಕೊಂಡು ಎಲ್ಲರ ಸಹಕಾರದೊಂದಿಗೆ ಪ್ರವಾಸವನ್ನು ಯಶಸ್ವಿಗೊಳಿಸುವಲ್ಲಿ ಸಫಲರಾಗಿರುತ್ತಾರೆ.

Post a Comment

0 Comments

Ad Code

Responsive Advertisement